ಸದಾಕಾಲ ಬರಪೀಡಿತವಾಗಿದ್ದರೂ ಅಧಿಕವಾದ ಜಿಡ್ಡಿನಾಂಶವನ್ನು ಹೊಂದಿರುವ ಎಮ್ಮೆ ಹಾಲು ಲಭ್ಯವಿರುವ, ವಿಶ್ವವಿಖ್ಯಾತ ಗೋಳ ಗುಮ್ಮಟ ಸ್ಮಾರಕವಿರುವ, ಚಾಳುಕ್ಯ ರಾಜವಂಶದ ಶಿಲ್ಪಕಲೆಗೆ ಹೆಸರಾದ ಮತ್ತು ದ್ರಾಕ್ಷಿ, ದಾಳಿಂಬೆ ಮೊದಲಾದ ಹಣ್ಣುಗಳಿಗೆ ಪ್ರಸಿದ್ಧವಾದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳನ್ನು ಒಳಗೊಂಡಿರುವ ಒಕ್ಕೂಟ. ಈ ಹಾಲು ಒಕ್ಕೂಟವು 11 ತಾಲ್ಲೂಕುಗಳ ವ್ಯಾಪ್ತಿಪ್ರದೇಶದಲ್ಲಿ ಕಾರ್ಯಾಚರಣೆಯಲ್ಲಿರುವ 428 ಸಹಕಾರ ಸಂಘಗಳನ್ನು ಒಳಗೊಂಡಿದೆ.
ಈ ಒಕ್ಕೂಟದಲ್ಲಿ 26 ಬಲ್ಕ್ ಮಿಲ್ಕ್ ಕೂಲರ್ ಮತ್ತು 340 ಸ್ವಯಂಚಾಲಿತ ಹಾಲು ಶೇಖರಣೆ ಕೇಂದ್ರಗಳು ಕಾರ್ಯಾಚರಣೆಯಲ್ಲಿವೆ.
ಈ ಒಕ್ಕೂಟವು ಪ್ರತಿನಿತ್ಯ ಸರಾಸರಿ 1.61 ಲಕ್ಷ ಕೇಜಿ ಹಾಲನ್ನು ಶೇಖರಣೆ ಮಾಡುತ್ತಲಿದ್ದು, ಸರಾಸರಿ 0.76 ಲಕ್ಷ ಲೀಟರ್ ಹಾಲನ್ನು ಮಾರಾಟ ಮಾಡುತ್ತಿದೆ ಮತ್ತು 0.09 ಲಕ್ಷ ಕೇಜಿ ಮೊಸರನ್ನು ಮಾರಾಟ ಮಾಡುತ್ತಿದೆ.
ಒಕ್ಕೂಟದ ಹಿರಿಮೆ: ಕ್ರೋಢೀಕೃತ ನಷ್ಟವನ್ನು ತೊಡೆದು ಹಾಕಿದ ನಂತರ ಒಕ್ಕೂಟವು ಈಗ ಲಾಭದಾಯಕವಾಗಿ ಮುನ್ನಡೆಯುತ್ತಿದೆ.
ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ
ವಿಜಯಪುರ ಡೇರಿ, ಭೂತನಾಳ್,ವಿಜಯಪುರ - 586 103, ಕರ್ನಾಟಕ.
ಫೋನ್: 08352 -260060/ 260949
ಫ್ಯಾಕ್ಸ್: 08352 - 260061
ಇ-ಮೈಲ್: [email protected]
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.
080-260 96800
ಸಹಾಯವಾಣಿ:
1800 425 8030 toll free 10.00AM - 5.30PM
(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)
ನಂದಿನಿ ನೆರವು ದೂರವಾಣಿ ಸಂಖ್ಯೆ (24*7):
080-66660000
ಫಾಕ್ಸ್:: 080-255 36105